ದಿನಾಂಕ 01.04.2025 ರಂದು ಸಂತ ಜೋಸೆಫರ ಹಿ.ಪ್ರಾ.ಶಾಲೆ ಕೆಲ್ವಾರಿ ನಂತೂರು ಇಲ್ಲಿನ 1ನೇ ತರಗತಿಯಿಂದ 7ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಸಹೋದಯ ಬೆಥನಿ ಸೇವಾ ಕೇಂದ್ರದ ವತಿಯಿಂದ ಒಂದು ದಿನದ ಬೇಸಿಗೆ ಶಿಬಿರವನ್ನು ಆಯೋಜಿಸಲಾಯಿತು. ದೇವರ ಪ್ರಾರ್ಥನೆಯೊಂದಿಗೆ ಬೇಸಿಗೆ ಶಿಬಿರವನ್ನು ಆರಂಭಿಸಲಾಯಿತು. ಮೊದಲಿಗೆ ಶಿಬಿರಾರ್ಥಿಗಳ ಪರಿಚಯ ಮಾಡಿಕೊಳ್ಳಲಾಯಿತು.ಕಾರ್ಯಕರ್ತೆ ವಾಣಿಯವರು ಅಭಿನಯ ಗೀತೆಗಳನ್ನು ಕಲಿಸಿದರು. ಬಳಿಕ ಮೌಲ್ಯಗಳ ಬಗ್ಗೆ ಸಣ್ಣ ಕತೆಗಳು ಹಾಗೂ ಕೆಲವು ಉದಾಹರಣೆಗಳ ಮೂಲಕ ಮಾಹಿತಿ ನೀಡಿದರು. ಕಾರ್ಯಕರ್ತೆ ಶ್ರೀಮತಿ ರೆನಿಲ್ಲಾ ರೋಶಿನಿಯವರು ವಿವಿಧ ಆಟಗಳನ್ನು ಆಡಿಸಿದರು.ಏಕಾಗ್ರತೆಗಳನ್ನು ಹೆಚ್ಚಿಸುವ ಆಟಗಳನ್ನು ಆಡಿಸಿದರು. ಕೆಲವು ಧನಾತ್ಮಕ ಚಿಂತನೆ, ನೀತಿ ಕತೆಗಳನ್ನು ಹೇಳಿದರು. ಹಾಡುಗಳನ್ನು ಕಲಿಸಿದರು.

ಬಳಿಕ ವಿದ್ಯಾರ್ಥಿಗಳನ್ನು 4 ಗುಂಪುಗಳನ್ನಾಗಿ ಮಾಡಿ, ಹೆಸರು ಸೂಚಿಸಲು ಹೇಳಿ, ಒಬ್ಬ ನಾಯಕ/ ನಾಯಕಿಯನ್ನು ಆರಿಸಲು ಹೇಳಲಾಯಿತು. ನಂತರ ಕೆಲವು ಪತ್ರಿಕೆಗಳನ್ನು ನೀಡಿ,ಗುಂಪಿನಲೊಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿಯನ್ನು ಸ್ವಾತಂತ್ರ್ಯ ಹೋರಾಟಗಾರನಿಗೆ ಹೋಲುವ ಹಾಗೆ ಸಿದ್ಧ ಮಾಡಲು ತಿಳಿಸಲಾಯಿತು. ಅವರ ಬಗ್ಗೆ 2 ನಿಮಿಷ ಮಾತನಾಡಲು ಹೇಳಲಾಯಿತು. ನಂತರ ಅದೇ ಗುಂಪಿನಲ್ಲಿ ಒಂದೊಂದು ವಿಷಯ ನೀಡಿ, ಇನ್ನೊಂದು ಗುಂಪು ಚಟುವಟಿಕೆ ಮಾಡಲು ತಿಳಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲಾ ನಾಯಕಿ ಧನ್ಯವಾದಗಳನ್ನು ಅರ್ಪಿಸಿದಳು. ಮುಖ್ಯ ಶಿಕ್ಷಕಿ ಶ್ರೀಮತಿ ಐರಿನ್‍ರವರು ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ ಹಂಚಿ, ಧನ್ಯವಾದಗಳನ್ನರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

 

 

 

 

 

 

 

 

 

Latest News

Contact Us

Bethany Social  Service Trust ®
Sahodaya Bethany Seva Kendra
Bendur
Mangalore-575002

Phone: 0824-2214156

E-Mail:[email protected]

Copyright ©2020 www.bsstmangalore.org.

Powered by